ಶಾಂತಿಮೊಗರು: ಬ್ರಹ್ಮಕಲಶದ ಆಮಂತ್ರಣ ಡಾ.ಹೆಗ್ಗಡೆ ಅವರಿಂದ ಬಿಡುಗಡೆ

ಬೆಳಂದೂರು: ಎಪ್ರಿಲ್ ನಲ್ಲಿ ನಡೆಯಲಿರುವ ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಆಮಂತ್ರಣವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಡಾ.ವೀರೇಂದ್ರ ಹೆಗ್ಗಡೆ ಅವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಬ್ರಹ್ಮಕಲಶ ಸಮಿತಿಯ ಅಧ್ಯಕ್ಷರಾದ ಸವಣೂರು ಕೆ.ಸೀತಾರಾಮ ರೈ,ಆಡಳಿತ ಮಂಡಳಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ , ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಗೌಡ ರಾಶಿ ಬರೆಪ್ಪಾಡಿ. ಕಾರ್ಯದರ್ಶಿ ವೆಂಕಟೇಶ ಭಟ್ ಕೊಯಕುಡೆ ಆರ್ಥಿಕ ಸಮಿತಿ ಸದಸ್ಯ ಲೋಕನಾಥ್ ವಜ್ರಗಿರಿ,ಕಾರ್ಯಾಲಯ ಸಮಿತಿ ಸದಸ್ಯ ನಾಗೇಶ ಕೆ. ಕೆಡೆಂಜಿ. ಪ್ರಚಾರ ಸಮಿತಿ ಸಂಚಾಲಕ ಉಮಾಪ್ರಸಾದ್ ರೈ ನಡುಬೈಲು,ಮನ್ವಿತ್ ಪಂಜ ರವರು ಉಪಸ್ಥಿತರಿದ್ದರು.

Leave A Reply

Your email address will not be published.