ಮಿನಿಬಸ್ ಬೈಕಿಗೆ ಢಿಕ್ಕಿ ಹೊಡೆದು ಪರಾರಿಯಾಗಲು ಯತ್ನ, ಬೆನ್ನಟ್ಟಿ ಹಿಡಿದ ಗ್ರಾಮಸ್ಥರು : ಮಹಿಳೆ ಗಂಭೀರ

ಕಡಬ : ಇಂದು ಮುಂಜಾನೆ ಮಿನಿಬಸ್ ಒಂದು ಬೈಕಿಗೆ ಢಿಕ್ಕಿ ಹೊಡೆದು ಬೈಕಿನಲ್ಲಿದ್ದ ಮಹಿಳೆಯೋರ್ವರು ಗಂಭೀರ ಗಾಯಗೊಂಡ  ಘಟನೆ ನಡೆದಿದೆ.

ಧರ್ಮಸ್ಥಳ  ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಚಾಕೋಟೆಕೆರೆ ಎಂಬಲ್ಲಿ ಈ  ಅಪಘಾತ ನಡೆದಿದ್ದು, ಮೀನಾಡಿ‌ ನಿವಾಸಿ  ಕುಟ್ರುಪ್ಪಾಡಿ ಪಂಚಾಯತ್ ಸದಸ್ಯೆ ಕುಸುಮಾ ಅವರು ಮೀನಾಡಿಯಿಂದ ಮರ್ಧಾಳ ಕಡೆಗೆ ಬೈಕಿನಲ್ಲಿ ಹೋಗುತ್ತಿದ್ದರು. 

ಆಗ ವೇಗವಾಗಿ ಹಿಂದಿನಿಂದ ಬಂದ ಮಿನಿ ಬಸ್ಸು ಓವರ್ಟೇಕ್ ಮಾಡುವ ಭರದಲ್ಲಿ ಬೈಕ್ ಗೆ ಢಿಕ್ಕಿ  ಹೊಡೆದಿದೆ. ಕುಸುಮಾ ಅವರು ಬೈಕ್ ಸಮೇತ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡರೂ ಸ್ವಲ್ಪವೂ ಮಾನವೀಯತೆ ತೋರಿಸದೆ ಮಿನಿ ಬಸ್ಸು ಪರಾರಿಯಾಗಲು ಯತ್ನಿಸಿದೆ.

ಪರಾರಿಯಾಗಲು ಯತ್ನಿಸಿದ್ದ ಮಿನಿ ಬಸ್ಸನ್ನು ಮರ್ಧಾಳದಲ್ಲಿ ಸಾರ್ವಜನಿಕರು ಹಿಡಿದು, ಕಡಬ ಪೊಲೀಸರಿಗೆ ಒಪ್ಪಿ ಸಿದ್ದಾರೆ.

ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಕುಸುಮಾ ಅವರಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ತಕ್ಷಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ 108 ಆಂಬ್ಯುಲೆನ್ಸ್ ಮೂಲಕ    ಕರೆದೊಯ್ಯಲಾಗಿದೆ.

Leave A Reply

Your email address will not be published.