ಶ್ರೀ ಕ್ಷೇತ್ರ ಗೆಜ್ಜೆಗಿರಿ ಬ್ರಹ್ಮಕಲಶೋತ್ಸವ |ಬೆಳ್ತಂಗಡಿಯಿಂದ ಹೊರೆಕಾಣಿಕೆ ಮೆರವಣಿಗೆ ಚಾಲನೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅಂಗವಾಗಿ ತಾಲೂಕಿನಿಂದ ಹೊರಕಾಣಿಕೆ ಸಮರ್ಪಣೆ ಗುರುವಾಯನಕೆರೆಯಿಂದ ಭವ್ಯ ಮೆರವಣಿಗೆಯೊಂದಿಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಗೆಜ್ಜೆಗಿರಿ ತಾಲೂಕು ಸಮಿತಿ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಮಹಿಳಾ ಸಮಿತಿ ಅಧ್ಯಕ್ಷೆ ಸುಜಿತಾ ವಿ ಬಂಗೇರ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ನಾವರ, ಹೊರ ಕಾಣಿಕೆ ತಾಲೂಕು ಸಮಿತಿ ಸಂಚಾಲಕ ಸಂತೋಷ್ ಉಪ್ಪಾರು, ಪ್ರಮುಖರಾದ ರವಿ ಕುಮಾರ್ ಬರೆಮೇಲು, ಜಗದೀಶ್ ಉಜಿರೆ, ಜಯಾರಾಮ್ ಬಂಗೇರ ಹೇರಾಜೆ, ಶಾಂಭವಿ ಬಂಗೇರ, ವಿನೋದಿನಿ ರಾಮಪ್ಪ, ಕೃಷ್ಣಪ್ಪ ಪೂಜಾರಿ ಲಾಲ, ಲಕ್ಷ್ಮಣ ಪೂಜಾರಿ, ವಿವಿಧ ಗ್ರಾಮಗಳ ಸಂಚಾಲಕರು ಭಕ್ತಾಧಿಗಳು ಹಾಜರಿದ್ದರು.

Leave A Reply

Your email address will not be published.