ಮುಕ್ಕೂರು|ಯುವ ಸೇನೆಯಿಂದ ಶ್ರಮದಾನ

ಸುಳ್ಯ: ಪೆರುವಾಜೆ ಗ್ರಾಮದ ಕುಂಡಡ್ಕ ಶ್ರೀ ಮೊಗೇರ ದೈವಸ್ಥಾನ, ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ಸಾನಿಧ್ಯ ಕ್ಷೇತ್ರವು ಒಂದು ಶತಮಾನದ ಇತಿಹಾಸ ಹೊಂದಿದ್ದು ಅತ್ಯಂತ ಕಾರಣಿಕ ಕ್ಷೇತ್ರವಾಗಿದೆ.

ಪ್ರಸ್ತುತ ಈ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಅಂತಿಮ ಹಂತದಲ್ಲಿದ್ದು ಎಪ್ರಿಲ್‌ನಲ್ಲಿ ಪ್ರತಿಷ್ಟಾದಿ ಕಾರ್ಯ ನಡೆಯಲಿದೆ.

ಇದರ ಜೀರ್ಣೋದ್ಧಾರ ಸಿದ್ದತಾ ಕೆಲಸ ಕಾರ್ಯಗಳು ನಡೆಯುತಿದ್ದು ಫೆ.22ರಂದು ಯುವ ಸೇನೆ ಮುಕ್ಕೂರು ಇದರ ವತಿಯಿಂದ ಶ್ರಮದಾನ ನಡೆಯಿತು.

Leave A Reply

Your email address will not be published.