ನದಿಗೆ ಮೀನು ಹಿಡಿಯಲು ಹೋಗುತ್ತೇನೆಂದು ಹೊರಟ ಶಿರಾಡಿ ಬಾಕಿಲಗದ್ದೆ ಹರೀಶ್ ಕಣ್ಮರೆ!

ನದಿಗೆ ಬಲೆಬೀಸಿ ಮೀನು ಹಿಡಿಯಲೆಂದು ಹೋದ ಶೀರಾದಿ ಗ್ರಾಮದ ಬಾಕಿಲಗದ್ದೆ ಹರೀಶ ಮನೆಗೆ ವಾಪಸ್ಸು ಬರದೆ ನಾಪತ್ತೆಯಾಗಿರುವ ಘಟನೆ ಗುಂಡ್ಯ ಬರ್ಚಿನಹಳ್ಳದಲ್ಲಿ ನಡೆದಿದೆ.

ಚೋಮ ಮುಗೇರ ಎಂಬವರ ಪುತ್ರನಾದ ಸುಮಾರು 27 ವರ್ಷ ವಯಸ್ಸಿನ ಹರೀಶನು ಮೀನು ಹಿಡಿಯಲೆಂದು ಗುಂಡ್ಯದ ಹೊಳೆಗೆ ಹೋಗುತ್ತೇನೆಂದು ಮನೆಯಲ್ಲಿ ತಿಳಿಸಿ ಹೋಗಿದ್ದನು.

ಆ ನಂತರ ಆತನ ಸುಳಿವೇ ಇಲ್ಲದೆ ಕಂಗಾಲಾದ ಮನೆಯವರು ಹುಡುಕಾಟ ನಡೆಸಿದ್ದರು ಮತ್ತು ಉಪ್ಪಿನಂಗಡಿ ಠಾಣೆಗೆ ಮಾಹಿತಿ ನೀಡಿದ್ದರು.

ಘಟನೆಯು ಶನಿವಾರ ಮುಂಜಾನೆ ನಡೆದಿದ್ದು ಹೆಚ್ಚಿನ ಮಾಹಿತಿ ಇನ್ನೂ ಬರಬೇಕಾಗಿದೆ.

ಅಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು ಹುಡುಕಾಟ ಆರಂಭಿಸಿದ್ದಾರೆ.

Leave A Reply

Your email address will not be published.