ನೆಲ್ಯಾಡಿ ಸಿ.ಎ.ಬ್ಯಾಂಕ್ ಅಧ್ಯಕ್ಷರಾಗಿ ಉಮೇಶ್ ಶೆಟ್ಟಿ ಪಟ್ಟೆ, ಉಪಾಧ್ಯಕ್ಷರಾಗಿ ಕಮಲಾಕ್ಷ ಗೋಳಿತ್ತೊಟ್ಟು ಅವಿರೋಧ ಆಯ್ಕೆ

ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಉಮೇಶ್ ಶೆಟ್ಟಿ ಪಟ್ಟೆ, ಉಪಾಧ್ಯಕ್ಷರಾಗಿ ಕಮಲಾಕ್ಷ ಗೋಳಿತ್ತೊಟ್ಟು ಅವಿರೋಧ ಆಯ್ಕೆ

ಕಡಬ : ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವಷ೯ಗಳ ಅವಧಿಗೆ ಅಧ್ಯಕ್ಷರಾಗಿ ಉಮೇಶ್ ಶೆಟ್ಟಿ ಪಟ್ಟೆ ಹಾಗೂ ಉಪಾಧ್ಯಕ್ಷರಾಗಿ ಕಮಲಾಕ್ಷ ಗೋಳಿತ್ತೊಟ್ಟು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಫೆ. 20ರಂದು ಸಂಘದ ಕಚೇರಿಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಆಯ್ಕೆ ನಡೆಯಿತು.

ಸಭೆಯಲ್ಲಿ ನಿದೇ೯ಶಕರುಗಳಾದ ಬಾಲಕೃಷ್ಣ ಬಾಣಜಾಲು, ಜಯಾನಂದ ಬಂಟ್ರಿಯಾಲ್, ಸವೋ೯ತ್ತಮ ಗೌಡ, ಪ್ರಶಾಂತ ರೈ ಅರಂತಬೈಲು, ಸುದಶ೯ನ ಪಾದಡ್ಕ, ಉಷಾ ಆಂಚನ್, ಸುಲೋಚನಾ ಡಿ, ಅಣ್ಣು ಬಿ, ಸುಮಿತ್ರಾ ಬೀದಿಮನೆ, ಗುರುರಾಜ್ ಭಟ್ ಉಪಸ್ಥಿತರಿದ್ದರು. ಬೆಳ್ತಂಗಡಿ ತಾಲೂಕು ಅಭಿವೃದ್ಧಿ ಅಧಿಕಾರಿ ಸುಕನ್ಯಾ ಚುನಾವಣಾಧಿಕಾರಿಯಾಗಿದ್ದರು.

ಸಂಘದ ಮುಖ್ಯ ಕಾಯ೯ನಿವ೯ಹಣಾಧಿಕಾರಿ ದಯಾಕರ ರೈ, ಶಾಖಾ ವ್ಯವಸ್ಥಾಪಕ ರತ್ನಾಕರ ಬಂಟ್ರಿಯಾಲ್ ರವರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.

Leave A Reply

Your email address will not be published.