ಫೆ.23 | ದೇವಸ್ಯದಲ್ಲಿ 19ನೇ ವರ್ಷದ ಭಜನಾ ಉತ್ಸವ

ಫೆ.23: ದೇವಸ್ಯದಲ್ಲಿ 19ನೇ ವರ್ಷದ ಭಜನಾ ಉತ್ಸವ

ಸವಣೂರು : ಪುಣ್ಚಪ್ಪಾಡಿ ಗ್ರಾಮದ ದೇವಸ್ಯ ಶ್ರೀ ಹರಿಭಜನಾ ಮಂಡಳಿಯ 19ನೇ ವರ್ಷದ ಸಾರ್ವಜನಿಕ ಭಜನಾ ಉತ್ಸವವು ದೇವಸ್ಯ ಹರಿನಗರದಲ್ಲಿ ಪುರೋಹಿತರಾದ.ಕೇಶವ ಕಲ್ಲೂರಾಯ ಬಂಬಿಲ ಅವರ ನೇತೃತ್ವದಲ್ಲಿ ಫೆ.23ರಂದು ನಡೆಯಲಿದೆ.

ಭಜನ ಉತ್ಸವದ ಅಂಗವಾಗಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಅಧ್ಯಕ್ಷತೆ ವಹಿಸುವರು.ರಾಜೇಶ್ ಶೆಟ್ಟಿ ಮೇನಾಲ ಧಾರ್ಮಿಕ ಉಪನ್ಯಾಸ ನೀಡುವರು. ಅತಿಥಿಗಳಾಗಿ ಪ್ರಕಾಶ್ ಶೆಟ್ಟಿ ತಡ್ಯಾಲಗುತ್ತು,ಶೀನಪ್ಪ ಪೂಜಾರಿ ದೇವಸ್ಯ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಳ್ಳುವರು.

ಸಮ್ಮಾನ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುರೇಶ್ ರೈ ಸುಡಿಮುಳ್ಳು, ಜಿಲ್ಲಾ ಪ್ರಶಸ್ತ ಪುರಸ್ಕೃತ ಶಿಕ್ಷಕ ಜಯಂತ ವೈ,ಎಸ್ಸೆಸೆಲ್ಸಿ ಸಾಧಕರ ವಿದ್ಯಾರ್ಥಿಗಳಾದ ಅಶ್ವಿನಿ ದೇವಸ್ಯ, ರಕ್ಷಿತಾ ಎನ್ ನಡುಮನೆ ಅವರಿಗೆ ಅವರಿಗೆ ಸಮ್ಮಾನ ಕಾರ್ಯಕ್ರಮ ನಡೆಯಲಿದೆ.

Leave A Reply

Your email address will not be published.