ಗುರುವಾಯನಕೆರೆ ಪಕ್ಕ ನಿಂತಿದ್ದ ಕಂಟೈನರ್ ಲಾರಿಗೆ ಅಂಗವಿಕಲರು ಬಳಸುವ ತ್ರಿಚಕ್ರ ವಾಹನ ಡಿಕ್ಕಿ : ಸವಾರನ ಕಾಲಿಗೆ ಗಂಭೀರ ಗಾಯ

ಗುರುವಾಯನಕೆರೆಯಿಂದ ಉಪ್ಪಿನಂಗಡಿಗೆ ಹೋಗುವ ದಾರಿಯಲ್ಲಿ, ಗುರುವಾಯಕೆರೆಯ ಕೆನರಾ ಬ್ಯಾಂಕ್ ಎಟಿಎಂ ನ ಪಕ್ಕ ನಿಂತಿದ್ದ ಕಂಟೈನರ್ ಲಾರಿಗೆ ಅಂಗವಿಕಲರು ಬಳಸುವ ತ್ರಿಚಕ್ರ ವಾಹನವೊಂದು ಡಿಕ್ಕಿ ಹೊಡೆದಿದೆ.

ಡಿಕ್ಕಿಯ ತೀವ್ರತೆಗೆ ತ್ರಿಚಕ್ರ ವಾಹನ ಸವಾರನ ಕಾಲಿಗೆ ಗಂಭೀರ ಗಾಯಗಳಾಗಿದೆ.

ಡಿಕ್ಕಿ ಹೊಡೆದ ರಭಸಕ್ಕೆ ತ್ರಿಚಕ್ರ ವಾಹನದ ಮುಂಭಾಗ ಮತ್ತು ಒಂದು ಬದಿಯ ಚಕ್ರದ ಭಾಗಕ್ಕೆ ಡ್ಯಾಮೇಜ್ ಆಗಿದೆ.

ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ. ತ್ರಿಚಕ್ರ ವಾಹನವನ್ನು ಅಂಗವಿಕಲ ವ್ಯಕ್ತಿಯಲ್ಲದೆ ಬೇರೊಬ್ಬ ವ್ಯಕ್ತಿ ಚಲಾಯಿಸಿದ್ದೆನ್ನಲ್ಲಾಗಿದೆ. ಅದ್ದರಿಂದ ಕಣ್ಣ ಅಂದಾಜು ತಪ್ಪಿ ತ್ರಿಚಕ್ರ ವಾಹನದ ಹಿಂಭಾಗದ ಟೈರ್ ಲಾರಿಗೆ ಗುದ್ದಿದೆ.

ಅಲ್ಲದೆ ನಿಂತಿದ್ದ ಲಾರಿಯ ಒಂದು ಟೈರ್ ಡಾಮರ್ ರೋಡಿನಲ್ಲಿ ಇತ್ತು. ಮಹಾರಾಷ್ಟ್ರ ರಿಜಿಸ್ಟ್ರೇಷನ್ ನ ಲಾರಿ ಇದಾಗಿದೆ.

ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ತನಿಖೆ ಆರಂಭಿಸಿದ್ದಾರೆ.

Leave A Reply

Your email address will not be published.