ಪಾಲ್ತಾಡು : ಒತ್ತೆಕೋಲದ ಆಮಂತ್ರಣ ಬಿಡುಗಡೆ,ಕೊಲ್ಲಿ ಮುಹೂರ್ತ

ಸವಣೂರು : ಕೊಳ್ತಿಗೆ ಗ್ರಾಮದ ಪಾಲ್ತಾಡು ನಡುಮನೆ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ವರ್ಷಾವ„ ಒತ್ತೆಕೋಲವು ಮಾ.24ರಂದು ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಆಮಂತ್ರಣ ಬಿಡುಗಡೆ ಪಾಲ್ತಾಡು ವಿಷ್ಣುನಗರದಲ್ಲಿ ನಡೆಯಿತು.

ಕೊಲ್ಲಿ ಮುಹೂರ್ತ

ವಿಷ್ಣುಮೂರ್ತಿ ದೈವಸ್ಥಾನದಲ್ಲಿ ವರ್ಷಾವಧಿ ಒತ್ತೆಕೋಲವು ಮಾ.24ರಂದು ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಕೊಲ್ಲಿ ಮುಹೂರ್ತ ನಡೆಯಿತು. ಮುಖ್ಯ ದೈವ ಪಾತ್ರಿ ಕೃಷ್ಣ ಮಣಿಯಾಣಿ ಮೊಗಪ್ಪೆ ಮುಹೂರ್ತ ನೆರವೇರಿಸಿದರು. ಪರಿಚಾರಕರಾದ ಬಾಬು ಎರ್ಕ,ಸೇಸಪ್ಪ ಮಡಿವಾಳ,ನವೀನ್ ಆಚಾರ್ಯ ವಿವಿಧ ಕಾರ್ಯ ನೆರವೇರಿಸಿದರು. ಈ ಸಂದರ್ಭ ದೈವಸ್ಥಾನದ ಆಡಳಿತ ಮೊಕ್ತೇಸರ ನವೀನ್ ರೈ ನಡುಮನೆ, ಪಾಲ್ತಾಡು ,ವಿಲಾಸ್ ರೈ ಪಾಲ್ತಾಡು,ಮಣಿಕ್ಕಾರ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ವಿನೋದ್ ರೈ ಪಾಲ್ತಾಡು,ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು ಹಾಗೂ ದೈವದ ಪರಿಚಾರಕರುಉಪಸ್ಥಿತರಿದ್ದರು.

Leave A Reply

Your email address will not be published.