ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ರಾಗಿ ಕೆ.ಸುರೇಂದ್ರನ್ ಆಯ್ಕೆ

ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ರಾಗಿ ಸುರೇಂದ್ರನ್ ಆಯ್ಕೆ

ಕೇರಳ ರಾಜ್ಯ ಬಿಜೆಪಿಯ ನೂತನ ಅಧ್ಯಕ್ಷ ರಾಗಿ ಸುರೇಂದ್ರನ್ ಆಯ್ಕೆಯಾಗಿದ್ದಾರೆ. ಈ ಹಿಂದೆ ಕೇರಳ ರಾಜ್ಯ ಬಿಜೆಪಿಯ ಅಧ್ಯಕ್ಷ ರಾಗಿ ಶ್ರೀಧರನ್‌ ಪಿಳ್ಳ ಎರಡು ಬಾರಿ ಕರ್ತವ್ಯ ನಿರ್ವಹಿಸಿದ್ದರು.

ಕೇರಳ ಬಿಜೆಪಿಯ ಅಧ್ಯಕ್ಷ ರಾಗಿದ್ದ ಕುಮ್ಮನಂ ರಾಜಶೇಖರನ್‌ ಅವರನ್ನು ಮಿಜೋರಾಂ ರಾಜ್ಯಪಾಲರನ್ನಾಗಿ ಮಾಡಿದ ಬಳಿಕ ಶ್ರೀಧರನ್ ಪಿಳ್ಳೆ ಅವರು ಆಯ್ಕೆಯಾಗಿದ್ದರು.

ಕೇರಳದಲ್ಲಿ ಲೋಕಲ್ ಬಾಡಿ ಚುನಾವಣೆಗಳು ಇನ್ನೇನು ಕೆಲವೇ ತಿಂಗಳುಗಳ ದೂರದಲ್ಲಿವೆ. ಅಲ್ಲದೆ ಬರುವ ವರ್ಷ 2021 ಅದಕ್ಕೆ ಕೇರಳದ ಅಸೆಂಬ್ಲಿ ಚುನಾವಣೆಗಳು ನಡೆಯಲಿದ್ದು ಕೆ ಸುರೇಂದ್ರನ್ ಅವರಿಗೆ ದೊಡ್ಡ ಜವಾಬ್ದಾರಿಯನ್ನು ವಹಿಸಲಾಗಿದೆ.

ಈಗಾಗಲೆ ಕೇಂದ್ರದ ಬಿಜೆಪಿ ನಾಯಕತ್ವ ಕೇರಳವನ್ನು ಹೇಗಾದರೂ ಮಾಡಿ ಕಮಲಯವನ್ನಾಗಿ ಮಾಡಲೇಬೇಕೆಂಬ ಪ್ಲಾನ್ ಹಾಕಿಕೊಂಡಿದೆ. ತಿಂಗಳುಗಳ ಹಿಂದೆ ನಡೆದ ಉಪ ಚುನಾವಣೆಗಳಲ್ಲಿ ಬಿಜೆಪಿ ಮುತುವರ್ಜಿಯಿಂದ ಕೆಲಸ ಮಾಡಿತ್ತು.

ನೋಡಾ…ನೋಡಾ… ಕೋಡಿಂಬಾಡಿ ಉಗ್ಗಪ್ಪ ಶೆಟ್ರ ಅಂಗಡಿಯಲ್ಲಿ ಈಗ್ಲೂ ಇದೆ ಗೋಲಿ ಸೋಡಾ !

Leave A Reply