ಪುಣ್ಚಪ್ಪಾಡಿ ನಡುಮನೆ : ಚಿಣ್ಣರ ಪಾರ್ಕ್‍ಗೆ ಗುದ್ದಲಿಪೂಜೆ

ಪುಣ್ಚಪ್ಪಾಡಿ ನಡುಮನೆ : ಚಿಣ್ಣರ ಪಾರ್ಕ್‍ಗೆ ಗುದ್ದಲಿಪೂಜೆ

ಸವಣೂರು :ಸವಣೂರು ಗ್ರಾ.ಪಂ.ವ್ಯಾಪ್ತಿಯ ಪುಣ್ಚಪ್ಪಾಡಿ ಗ್ರಾಮದ ನಡುಮನೆ ಎಂಬಲ್ಲಿ ಚಿಣ್ಣರ ಪಾರ್ಕ್ ನಿರ್ಮಾಣಕ್ಕೆ ಗುದ್ದಲಿಪೂಜೆ ನಡೆಯಿತು. ಜಿ.ಪಂ.ಸದಸ್ಯೆ ಪ್ರಮೀಳಾ ಜನಾರ್ಧನ ಅವರು ಗುದ್ದಲಿಪೂಜೆ ನೆರವೇರಿಸಿದರು. ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಲಲಿತಾ ಈಶ್ವರ್, ತಾಲೂಕು ಪಂಚಾಯತ್ ಸದಸ್ಯೆ ಕು. ರಾಜೇಶ್ವರಿ ಕೆ, ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ ಬಿ.ಕೆ,ಸದಸ್ಯರಾದ ಸತೀಶ್ ಬಲ್ಯಾಯ,ನಾಗೇಶ್ ಓಡಂತರ್ಯ, ಪಿಡಿಓ ನಾರಾಯಣ ಬಟ್ಟೋಡಿ,ಪುತ್ತೂರು ಎ.ಪಿ.ಎಂ.ಸಿ. ಅಧ್ಯಕ್ಷ ದಿನೇಶ್ ಮೆದು, ಸವಣೂರು ಸಿ.ಎ. ಬ್ಯಾಂಕ್ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯ,ನಿರ್ದೇಶಕರಾದ ಮಹಾಬಲ ಶೆಟ್ಟಿ ಕೊಮ್ಮಂಡ,ಸೋಮನಾಥ ಕನ್ಯಾಮಂಗಲ,ನ್ಯಾಯವಾದಿ ಮಹೇಶ್ ಕೆ.ಸವಣೂರು,ಪ್ರವೀಣ್ ಬಂಬಿಲದೋಳ,ಗ್ರಾ.ಪಂ.ಮಾಜಿ ಸದಸ್ಯ ನಾಗರಾಜ ನಿಡ್ವಣ್ಣಾಯ,ಮಾಜಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ,ಪ್ರಮುಖರಾದ ಲೋಕೇಶ್ ಕನ್ಯಾಮಂಗಲ,ಬಾಬು ದೇವಸ್ಯ,ಪ್ರಜ್ವಲ್ ಕೆ.ಆರ್,ಗ್ರಾ.ಪಂ.ಸಿಬಂದಿ ಪ್ರಮೋದ್ ಕುಮಾರ್ ಬಿ,ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಕರುಣಾಕರ ಸಾರಕರೆ ಮೊದಲಾದವರಿದ್ದರು. ಗ್ರಾ.ಪಂ.ಸದಸ್ಯ ಗಿರಿಶಂಕರ ಸುಲಾಯ ಸ್ವಾಗತಿಸಿ,ವಂದಿಸಿದರು.

Leave A Reply

Your email address will not be published.