ಸುಬ್ರಹ್ಮಣ್ಯದ ಪಕ್ಕದ ಹರಿಹರ ಪಲ್ಲತಡ್ಕ ಬಳಿ ಕಡವೆ ದಾಳಿಗೆ ವ್ಯಕ್ತಿಗೆ ಗಾಯ | ಅದೃಷ್ಟ ಕೈಕೊಟ್ಟರೆ ಖುದಾ ಕ್ಯಾ ಕರೇಗಾ ?

ಸುಬ್ರಹ್ಮಣ್ಯದ ಪಕ್ಕದ ಹರಿಹರ ಪಲ್ಲತಡ್ಕ ಬಳಿಯ ಕಟ್ಟಕ್ರಾಸ್ ಬಳಿ ರಾಜೇಶ್‌ ಪರಮಲೆ ಎಂಬವರ ಮೇಲೆ ಕಡವೆ ಧಾಳಿ ಮಾಡಿ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.

ಬೆಳಗ್ಗಿನ ಜಾವ ರಾಜೇಶ್ ಅವರು ಗುಂಡಿಹಿತ್ಲುವಿನಿಂದ ಹರಿಹರ ಕಡೆ ಬರುತ್ತಿದ್ದರು. ಕಟ್ಟ ಕ್ರಾಸ್ ತಲುಪುವಾಗ ಕಡವೆಯೊಂದು ಅಡ್ಡ ಬಂದಿದ್ದು ತಕ್ಷಣ ಬೈಕ್ ನಿಲ್ಲಿಸಿದ್ದಾರೆ.

ಬಳಿಕ ಮುಂದೆ ತೆರಳುತ್ತಿದ್ದಂತೆ ಮತ್ತೊಂದು ಕಡವೆಯು ರಾಜೇಶ್ ಅವರ ಮೇಲೆ ದಾಳಿ ಮಾಡಿದ್ದು ಅವರು ಬೈಕ್ ಸಮೇತ ನೆಲಕ್ಕುರುಳಿದ್ದಾರೆ. ಎಲ್ಲೋ ಇದ್ದ ಕಡವೆ ಓಡಿಬಂದು ದಾಳಿ ಮಾಡಿದ್ದು ಎಲ್ಲರನ್ನೂ ಅಚ್ಚರಿಗೆ ನೂಕಿದೆ.

ಪರಿಣಾಮ ಅವರಿಗೆ ತಲೆ ಭಾಗಕ್ಕೆ, ಮತ್ತಿತರ ಕಡೆ ಗಾಯವಾಗಿದ್ದು ತಕ್ಷಣವೇ ಅವರನ್ನು ಪುತ್ತೂರಿಗೆ ಕೊಂಡೊಯ್ಯಲಾಯಿತು. ಚಿಕಿತ್ಸೆ ಬಳಿಕ ಮನೆಗೆ ಮರಳಿದ್ದಾರೆ ಎಂದು ತಿಳಿದು ಬಂದಿದೆ .

Leave A Reply

Your email address will not be published.