Breaking । ಮಂಗಳೂರು ಟೈಮ್ ಬಾಂಬ್ ಆರೋಪಿ ಗುರುತು ಪತ್ತೆ? | ಶೀಘ್ರ ಬಂಧನಕ್ಕಾಗಿ ಸರ್ಪ ವ್ಯೂಹ ರಚನೆ

ಮಂಗಳೂರು ಟೈಮ್ ಬಾಂಬ್ ಆರೋಪಿ ಗುರುತು ಪತ್ತೆಯಾಗಿದೆ. ಆರೋಪಿಯು ಮಣಿಪಾಲದ ಕೃಷ್ಣಮೂರ್ತಿ ಅವರ ಮಗ ಆದಿತ್ಯ ರಾವ್ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ.

ಅಧಿಕೃತ ಮಾಹಿತಿ ಇನ್ನೂ ಬರಬೇಕಿದೆ. ಆದರೆ ಸಿಕ್ಕಿರುವ ಮಾಹಿತಿ ನಿಖರವೇ ಎಂದು ಹೇಳಲಾಗುತ್ತಿದೆ.

ನಿನ್ನೆ ತಾನೇ ಆರೋಪಿಯು ಉಡುಪಿಯತ್ತ ಚಲಿಸಿದ್ದಾನೆ ಎಂದು ನಾವು ವರದಿ ಮಾಡಿದ್ದೆವು. ಅಂತೆಯೇ, ಆತ ಉಡುಪಿ ಮಾರ್ಗವಾಗಿ ಪರಾರಿಯಾಗಿರುವ ಶಂಕೆ ಇದೆ.

ಈತ ಈ ಹಿಂದೆ ಕೂಡಾ ಬೆಂಗಳೂರಿನಲ್ಲಿ ಹುಸಿ ಬಾಂಬ್ ಕರೆ ಮಾಡಿ ಪೋಲೀಸರ ಅತಿಥಿಯಾಗಿದ್ದನೆಂದು ತಿಳಿದುಬಂದಿದೆ. ಈಗ ಆದಿತ್ಯನ ತಂದೆ ಮತ್ತು ಕುಟುಂಬಸ್ಥರ ವಿಚಾರಣೆಯು ನಡೆಯುತ್ತಿದ್ದು ಆತನ ತಂದೆ ಮತ್ತು ತಮ್ಮನನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಪೊಲೀಸ್ ರು ಇದನ್ನು ಇನ್ನೂ ಖಚಿತಪಡಿಸಿಲ್ಲ.

ಆರೋಪಿಯ ಪತ್ತೆಗಾಗಿ ಒಟ್ಟು 3 ಬಲಿಷ್ಠ ತಂಡಗಳನ್ನು ಹೆಣೆಯಲಾಗಿದೆ ಈ ತಂಡಗಳು ತನಿಖೆಯ ಹಲವು ದಿಕ್ಕಿನೆಡೆಗೆ ಚದುರಿಕೊಂಡು ಆರೋಪಿಯ ಶೀಘ್ರ ಪತ್ತೆಗಾಗಿ ಶತಪ್ರಯತ್ನ ನಡೆಸಿದ್ದಾರೆ.

ಈ ನಡುವೆ ಶಂಕಿತನು ವಿಮಾನ ನಿಲ್ದಾಣಕ್ಕೆ ಬಂದ ಮತ್ತು ಅಲ್ಲಿ ಬ್ಯಾಗ್ ಇಟ್ಟು ಹೊರಗೆ ಹೋದ ವಿಡಿಯೋಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

Leave A Reply

Your email address will not be published.