ಕಾಂಗ್ರೆಸ್ ನಿಂದ ವೀರ ಸಾವರಕರ್ ಅವರಿಗೆ ಅವಮಾನ ? । ಪುತ್ತೂರಿನಲ್ಲಿ ಸಹಾಯಕ ಕಮಿಷನರ್ ಗೆ ದೂರು

ಭೋಪಾಲದ ಕಾಂಗ್ರೆಸ್ ಟ್ರೈನಿಂಗ್ ಸೆಂಟರಿನಲ್ಲಿ ಇತ್ತೀಚಿಗೆ ವೀರ ಸಾವರಕರ್ ಅವರನ್ನು ಅವಮಾನಿಸುವಂತಹ ‘ ಸಾವರ್ಕರ್- ಕಿತ್ನೆ ವೀರ್ ‘ ಎಂಬ ಹೆಸರಿನಲ್ಲಿ ವಿತರಿಸಿದ್ದ ಪುಸ್ತಕದ ಭಾಷೆ ಮತ್ತು ದನಿಯ ಬಗ್ಗೆ ಆಕ್ಷೇಪ ಕೇಳಿಬಂದಿದೆ.

ಈಗ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಪುತ್ತೂರು ಸಹಾಯಕ ಕಮಿಶನರ್ ಅವರಿಗೆ ದೂರು ನೀಡಲಾಗಿದೆ

” ಸಾವರ್ಕರ್ ಮಾತ್ರವಲ್ಲ, ರಾಷ್ಟ್ರಪುರುಷರ ಮತ್ತು ಕ್ರಾಂತಿಕಾರಿಗಳ ಅವಹೇಳನವು ಯಾರಿಂದಲೂ ಆಗಬಾರದು. ಕೇಂದ್ರ ಸರ್ಕಾರವು, ಆ ಬಗ್ಗೆ ಸೂಕ್ತ ಕಾನೂನು ಮಾಡಬೇಕು. ಈಗ ಕಾಂಗ್ರೆಸ್ ವಿತರಿಸಿದ ಪುಸ್ತಕದಿ೦ದ ಪರಸ್ಪರ ವೈಷಮ್ಯ ಮತ್ತು ಅಶಾಂತಿ ಮೂಡಿಸುವ ಉದ್ದೇಶ ಇದೆ; ಬೇರೇನಿಲ್ಲ. ಆದುದರಿಂದ ಆ ಪುಸ್ತಕವನ್ನು ಈ ಕೂಡಲೇ ನಿಷೇಧಿಸಬೇಕು ” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಮನವಿಯನ್ನು ಪುತ್ತೂರ್ ಸಹಾಯಕ ಕಮಿಷನರ್ ಮತ್ತು ಪುತ್ತೂರು ನಗರ ಠಾಣಾಧಿಕಾರಿಗಳಿಗೆ ನೀಡಲಾಗಿದೆ.

1 Comment
  1. dobry sklep says

    Wow, wonderful weblog layout! How lengthy have you been blogging for?
    you made blogging glance easy. The entire look of your site is great, as well as the content
    material! You can see similar here dobry sklep

Leave A Reply

Your email address will not be published.