ಕಾವಿನಮೂಲೆಯ ಬಳಿ ರಸ್ತೆ ಅಪಘಾತ । ಕೊಲ್ಲಮೊಗ್ರುವಿನ ಸ್ಕೂಟಿ ಸವಾರ ಗಂಭೀರ

ಬೆಳ್ಳಾರೆ : ಇಂದು ಬೆಳಿಗ್ಗೆ ಬೆಳ್ಳಾರೆ ಸಮೀಪದ ಕಾವಿನ ಮೂಲೆಯಲ್ಲಿ ವ್ಯಾನ್ ಮತ್ತು ಸ್ಕೂಟಿ ಪರಸ್ಪರ ಡಿಕ್ಕಿ ಹೊಡೆದುಕೊಂಡು ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ.

ಬೆಳ್ಳಾರೆಯಿಂದ ಸುಳ್ಯ ಕಡೆಗೆ ವ್ಯಾನ್ ಹೋಗುತ್ತಿತ್ತು. ವಿರುದ್ಧ ದಿಕ್ಕಿನಿಂದ, ಸೋಣಂಗೇರಿ ಕಡೆಯಿಂದ ಬೆಳ್ಳಾರೆಗೆ ಬರುತ್ತಿದ್ದ ಸ್ಕೂಟಿ ಯು ಕಾವಿನಮೂಲೆಯಲ್ಲಿ ಡಿಕ್ಕಿ ಹೊಡೆದು ಕೊಂಡವು.

ಸ್ಕೂಟಿ ಸವಾರರಾದ, ಕೊಲ್ಲಮೊಗ್ರುವಿನ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದುಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಕಲ್ಲಡ್ಕ ಘರ್ಜನೆ । ಬಂಡೆ ಬ್ಲಾಸ್ಟ್

Leave A Reply

Your email address will not be published.