ಹಸುಳೆಯನ್ನು ನೆಲಕ್ಕೆ ಒಗೆದ ಕಿರಾತಕ ತಂದೆ । ಪುತ್ತೂರು ಬಸ್ ಸ್ಟ್ಯಾಂಡಿನಲ್ಲಿ ನಡೆದ ಘಟನೆ

ತನ್ನ ಒಂದು ವರ್ಷದ ಹಸುಗೂಸನ್ನುತನ್ನ ತಂದೆಯೇ ನೆಲಕ್ಕೆ ಎತ್ತಿ ಒಗೆದು ಕ್ರೌರ್ಯ ಮೆರೆದಿದ್ದಾನೆ.

ಉತ್ತರ ಕರ್ನಾಟಕ ಮೂಲದ ದಂಪತಿಯರಿಬ್ಬರು ಬಸ್ ಸ್ಟ್ಯಾಂಡಿನಲ್ಲಿ ಪರಸ್ಪರ ಕಚ್ಚಾಟ ನಡೆಸುತ್ತಿದ್ದರು. ಆ ಸಮಯದಲ್ಲಿ ಕುಡಿದ ಮತ್ತಿನಲ್ಲಿದ್ದ ಮಗುವಿನ ಸ್ವಂತ ತಂದೆಯೇ, ತನ್ನ ಗಂಡು ಮಗುವನ್ನು ನೆಲಕ್ಕೆ ಒಗೆದಿದ್ದಾನೆ.

ಮಗುವಿನ ಅದೃಷ್ಟ ದೊಡ್ಡದಿತ್ತು. ಮಗು ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪಾರಾಗಿದೆ.

ಘಟನೆ ಕಂಡ ಜನರು ಗುಂಪು ಸೇರಿಕೊಂಡು ಆತನ ಬಗ್ಗೆ ವ್ಯಾಪಕ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರು. ಪ್ರಜ್ಞಾವಂತ ಮಹಿಳೆಯೊಬ್ಬರು, ಸ್ವತಃ ಪೊಲೀಸ್ ಸ್ಟೇಷನ್ ಗೆ ನಡೆದು, ಆತನನ್ನು ಯಾವುದೇ ಕಾರಣಕ್ಕೆ ಬಿಡುಗಡೆಗೊಳಿಸಬಾರದೆಂದು ಆಕ್ರೋಶ ವ್ಯಕ್ತಪಡಿಸಿದ್ದು ಕಂಡು ಬಂತು.

ಅಪರಾಧಿ ತಪ್ಪಿಸಿಕೊಂಡು ಓಡಿಹೋಗಲು ಪ್ರಯತ್ನಿಸಿದರೂ, ಅದಕ್ಕೆ ಬಸ್ ಸ್ಟ್ಯಾಂಡಿನ ಪೊಲೀಸರು ಮತ್ತು ಸಾರ್ವಜನಿಕರು ಅವಕಾಶ ನೀಡಲಿಲ್ಲ. ಈಗ ಆತ ಪೋಲಿಸರ ಅತಿಥಿ.

ಕಾವಿನಮೂಲೆ ಸ್ಕೂಟಿ ಅಪಘಾತ । ಸವಾರ ಕೊಲ್ಲಮೊಗ್ರು ಚಾಂತಳದ ಚಿದಾನಂದ ಮೃತ

ಅಮೇರಿಕ ವಾಯು ನೆಲೆ ಮೇಲೆ ಇರಾನ್ ಮತ್ತೆ ದಾಳಿ । ಟ್ರ೦ಪ್ ನ ಅಸಹ್ಯ ಮೌನದ ಹಿಂದಿನ ಮರ್ಮವೇನು ?

2 Comments
  1. Avish Kumar R says

    Aids not relevant to the topic

    1. hosakannada says

      Hi boss

Leave A Reply

Your email address will not be published.