ಪುತ್ತೂರಲ್ಲಿ CM ಪರಿಹಾರ, ಪರಿಶಿಷ್ಟ ಜಾತಿ-ಪಂಗಡಗಳ ಫಲಾನುಭವಿಗಳಿಗೆ ತ್ರಿಚಕ್ರ ವಾಹನ ವಿತರಣೆ

ಪುತ್ತೂರು : ಶಾಸಕರಾದ ಶ್ರೀ ಸಂಜೀವ ಮಠಂದೂರು ಇವರ ಶಿಫಾರಸು ಮೇರೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ನೆಟ್ಟಣಿಗೆ ಮುಡ್ನೂರು ಗ್ರಾಮದ ಕೊಟ್ಯಾಡಿ ಕರ್ನೂರು ನಿವಾಸಿ ಶ್ರೀ ಉಮ್ಮರ್ ಇವರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ರೂ.61,000 ಮಂಜೂರಾಗಿದೆ. ಇಂದು ಪರಿಹಾರ ನಿಧಿಯ ಚೆಕ್ ಅನ್ನು ಶಾಸಕರು ವಿತರಿಸಿದರು.

ಪುತ್ತೂರು ನಗರಸಭೆ ಅನುದಾನದಡಿ 24.10 ಶೇಕಡಾ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗಗಳ ನೆಲೆಗತ್ತಿನಲ್ಲಿ2018-19 ಸಾಲಿನ ತ್ರಿಚಕ್ರ ವಾಹನವನ್ನು ಆಯ್ದ ಫಲಾನುಭವಿಗಳಿಗೆ ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರುರವರು ಇಂದು ಹಸ್ತಾಂತರಿಸಿದರು.

Leave A Reply

Your email address will not be published.