ರಾಜ್ಯ ಮಟ್ಟದ ಕಬಡ್ಡಿ ತೀರ್ಪುಗಾರರ ಪರೀಕ್ಷೆಯಲ್ಲಿ ಸವಣೂರಿನ ರಕ್ಷಿತ್, ಕುಲಪ್ರಕಾಶ್ ಮೆದು, ಮನೋಹರ್ ಮೆದು ತೇರ್ಗಡೆ

ಸವಣೂರು: ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋರಾಜ್ಯ ಮಟ್ಟದ ಕಬಡ್ಡಿ ತೀರ್ಪುಗಾರರ ಪರೀಕ್ಷೆಯಲ್ಲಿ ಸವಣೂರಿನ ರಕ್ಷಿತ್, ಕುಲಪ್ರಕಾಶ್, ಮನೋಹರ್ ತೇರ್ಗಡೆಸಿಯೇಶನ್ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಡೆಸಿದ ರಾಜ್ಯ ಮಟ್ಟದ ಕಬಡ್ಡಿ ತೀರ್ಪುಗಾರರ ಪರೀಕ್ಷೆಯಲ್ಲಿ ಸವಣೂರು ಗ್ರಾಮದ ನಡುಬೈಲು ರಕ್ಷಿತ್ ಭಂಡಾರಿ, ಕುಲಪ್ರಕಾಶ್ 2012, ಮನೋಹರ್ ಮೆದು ತೇರ್ಗಡೆ ಹೊಂದಿದ್ದಾರೆ.

ಇವರಿಗೆ ಆರ್ಹತಾ ಪ್ರಮಾಣ ಪತ್ರ ಡಿ 25 ರಂದು ಸುಳ್ಯದಲ್ಲಿ ನಡೆದ ಸುಳ್ಯ ಹಬ್ಬದ ಕಬಡ್ಡಿ ಪಂದ್ಯಾವಳಿಯ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‍ನ ಚೇರ್ಮೆನ್ ಷಣ್ಮುಗಂ, ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ನಿಕಟಪೂರ್ವ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಅರೆಭಾಷೆ ಅಕಾಡೆಮಿಯ ಮಾಜಿ ಅಧ್ಯಕ್ಷ ಪಿ.ಸಿ ಜಯರಾಮರವರು ಪ್ರಮಾಣ ಪತ್ರ ಮತ್ತು ರಾಜ್ಯ ಕಬಡ್ಡಿ ತೀರ್ಪುಗಾರರ ಅರ್ಹತಾ ಸರ್ಟಿಫಿಕೇಟ್ ವಿತರಿಸಿದರು.

ರಾಜ್ಯ ಮಟ್ಟದ ಕಬಡ್ಡಿ ತೀರ್ಪುಗಾರರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವ ನಡುಬೈಲು ರಕ್ಷಿತ್ ಭಂಡಾರಿ, ಕುಲಪ್ರಕಾಶ್ ಮೆದು, ಮನೋಹರ್ ಮೆದು ಸವಣೂರು ಯುವಕ ಮಂಡಲದ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

Leave A Reply

Your email address will not be published.