ಕರ್ನಾಟಕದ ರೈತರಿಗೆ ಮೋದಿಯ 12000 ಕೋಟಿಯ ಹೊಸ ವರ್ಷದ ಜಬರ್ದಸ್ತ್ ಗಿಫ್ಟ್ : ಅನ್ನದಾತ ಫುಲ್ ಖುಷ್

ಆರು ಕೋಟಿ ಕರ್ನಾಟಕದ ಕೃಷಿಕರಿಗೆ 12,000 ಕೋಟಿ ರೂಪಾಯಿ ಬಿಡುಗಡೆ ಯಾಗಿದೆ. ಸಿದ್ದಗಂಗಾಮಠದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೊಸ ವರ್ಷದ ಹೊಸ್ತಿಲಲ್ಲಿ ಕರ್ನಾಟಕ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ.
ಪ್ರಧಾನಮಂತ್ರಿಯವರ ಕಿಸಾನ್ ಸಮ್ಮಾನ್ ಯೋಜನೆಯ ಫಲವಾಗಿ ಕರ್ನಾಟಕದ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ ಮೂರನೇ ಕಂತನ್ನು ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.

” 2020ರ ಹೊಸವರ್ಷವನ್ನು ಅನ್ನದಾತರೊಂದಿಗೆ ಪ್ರಾರಂಭಿಸುವುದು ನನಗೆ ತುಂಬಾ ಖುಷಿ ತಂದಿದೆ. ನಾನು 130 ಕೋಟಿ ದೇಶದ ಪ್ರಜೆಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ನಮ್ಮ ದೇಶದ ಕೃಷಿಕರು ದುಡಿಮೆಯಿಂದಾಗಿ ಇವತ್ತು ಆಹಾರದ ಅಭಾವಿಂದಾಗಿ ಇವತ್ತು ಆಹಾರದ ಅಭಾವ ದೇಶದಲ್ಲಿ ಇಲ್ಲವಾಗಿದೆ ” ಎಂದು ಈ ಸಂದರ್ಭದಲ್ಲಿ ಮೋದಿಯವರು ಹೇಳಿದರು.

ಕೃಷಿ ಕರ್ಮನ್ ಪ್ರಶಸ್ತಿ ವಿತರಣಾ ಸಂದರ್ಭದಲ್ಲಿ ಕರ್ನಾಟಕದ ಮತ್ತು ತಮಿಳುನಾಡಿನ ಕೃಷಿಕರಿಗೆ ಮತ್ತು ಮೀನುಗಾರರಿಗೆ ಯಂತ್ರೋಪಕರಣಗಳನ್ನು ವಿತರಿಸಿದರು.

ಅಲ್ಲದೆ, ಸಿದ್ದಗಂಗಾ ಮಠದ ಶಿವಾಚಾರ್ಯ ಗುರುಗಳು ಮತ್ತು ಮೊನ್ನೆ ತಾನೆ ತೀರಿಹೋದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಧಾರ್ಮಿಕ ಸಾಮಾಜಿಕ ಕಾರ್ಯಗಳಲ್ಲಿ ಸಂದರ್ಭದಲ್ಲಿ ನೆನೆಸಿಕೊಂಡರು.
ಸಾಧು ಸಂತರುಗಳು ಮತ್ತು ಜನರಲ್ಲಿ ಪ್ರಧಾನಿಯವರು ತಮ್ಮಮೂರು ನಿರ್ಣಯಗಳಿಗೆ ಬೆಂಬಲವನ್ನು ಕೋರಿದರು.

ನಿರ್ಣಯ 1 : ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ ಗಳಿಗೆ ಪ್ರಾಮುಖ್ಯತೆ ನೀಡುವ ಪುರಾತನ ಸಂಸ್ಕೃತಿಯನ್ನು ಬಲಪಡಿಸುವುದು.

ನಿರ್ಣಯ 2 : ಪ್ರಕೃತಿ ಮತ್ತು ಪರಿಸರವನ್ನು ರಕ್ಷಿಸುವುದು.

ನಿರ್ಣಯ 3 : ಜಲಮೂಲಗಳ ಸಂರಕ್ಷಣೆ ಮತ್ತು ನೀರಿನ ಕೊಯ್ಲು ಮಾಡಿ ಜಲ ಸಂರಕ್ಷಣೆ.

ನಿರೀಕ್ಷಿಸಿ : ಮೋದಿಯ ಸಮ್ಮುಖದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರು ಇಟ್ಟ ಬೇಡಿಕೆಗಳೇನು? ಹೊಸ ಕನ್ನಡ. ಕಾಮ್ ನ ನೋಟಿ ಫಿಕೇಶನ್ ಬಂದಾಗ allow ಒತ್ತಿ, ನಮ್ಮ ಹೊಸ ಸುದ್ದಿ ಮತ್ತು ಲೇಖನಗಳ ತಕ್ಷಣದ ಮಾಹಿತಿ ಪಡೆಯಿರಿ.

Leave A Reply

Your email address will not be published.