ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ಕುಶಲೋಪರಿ । ಆಸ್ಪತ್ರೆಯಲ್ಲಿ ಮತ್ತೆ ಹಳೆಯ ದಿನಕ್ಕೆ ಮರಳಿದ ಗುರು ಶಿಷ್ಯರು

ರಮೇಶ್ ಜಾರಕಿಹೊಳಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಸೇರಿದ ಸಿದ್ದರಾಮಯ್ಯರನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ತಮ್ಮ ಮಾತು ಮೀರಿ ಕಾಂಗ್ರೆಸ್ಸ್ ಬಿಟ್ಟು ಬಿಜೆಪಿ ಸೇರಿದ ರಮೇಶ್ ಜಾರಕಿಹೊಳಿಯವರನ್ನು ಸರಿಯಾಗಿಯೇ ಕಿಚಾಯಿಸಿದ್ದಾರೆ.

” ಏನಯ್ಯ ರಮೇಶಾ, ಆಗ ಬಾ ಅಂದಾಗ ಬಂದಿಲ್ಲ, ಈಗ ಬಂದ್ಯಾ? ”

ಅದಕ್ಕೆ ರಮೇಶ್ ಜಾರಕಿಹೊಳಿಯವರು ” ನಿಮ್ಮ ಆರೋಗ್ಯ ಮುಖ್ಯ ಸಾರ್. ನೀವು ನಮ್ಮ ಗುರುಗಳು.” ಅಂದಿದ್ದಾರೆ.

” ಏನು ಮಿನಿಸ್ಟರ್ ಆಗ್ತೀಯ ?” ಸಿದ್ದು ಕೇಳಿದ್ದಾರೆ.

” ನಿಮ್ಮ ಆಶೀರ್ವಾದ ಇರ್ಲಿ ಸಾರ್ ” ಅಂದಿದ್ದಾರೆ.

” ನಂದೇನಪ್ಪಾ, ನಿಮ್ಮ ಯಡಿಯೂರಪ್ಪನವರ ಆಶೀರ್ವಾದ ಇರ್ಬೇಕು ” ಇದು ಸಿದ್ದು ಮತ್ತು ರಮೇಶ್ ಜಾರಕಿ ಯವರ ನಡುವಿನ ಸಂಭಾಷಣೆಯ ತುಣುಕು.

ರಾಜಕೀಯ ವೈರತ್ವ ಬೇರೆ ಮಾನವೀಯ ಸಂಭಂದ ಬೇರೆ ಎಂದು ಮಾಜಿ ಗುರುಶಿಷ್ಯರು ತೋರಿಸಿಕೊಟ್ಟಿದ್ದಾರೆ.

Leave A Reply

Your email address will not be published.