ಕೆ ಅರ್ ಪೇಟೆಯ ಸೋಲಿನ ಮೂಲಕ ಜೆಡಿಎಸ್ ಸ್ಪಷ್ಟವಾಗಿ ಕರ್ನಾಟಕದ ರಾಜಕೀಯದಿಂದ ನೇಪಥ್ಯಕ್ಕ್ಕೆಸರಿಯಲಿದೆ !

ಜೆಡಿಎಸ್ ನ ಭದ್ರಕೋಟೆ, ಕೆ ಅರ್ ಪೇಟೆಯು ಜೆಡಿಎಸ್ ನ ಕೈ ಕೊಸರಿಕೊಂಡು ಹೊರಗೆ ಬಂದಿದೆ. ಕೆ ಅರ್ ಪೇಟೆಯಲ್ಲಿ ನಾರಾಯಣಗೌಡರು ಜೆಡಿಎಸ್ ಅನ್ನು ಮಕಾಡೆ ಮಲಗಿಸಿದ್ದಾರೆ. ಮಂಡ್ಯ ಮೈಸೂರು ಮುಂತಾದ ಒಕ್ಕಲಿಗರ ಪ್ರಾಬಲ್ಯದ ಪ್ರದೇಶಗಳಂತೆಯೇ, ಕೆ ಅರ್ ಪೇಟೆಯೂ ಜೆಡಿಎಸ್ ನ ಏಕಸ್ವಾಮ್ಯದ ಪ್ರದೇಶ. ಈಗ ಇದು ಕೂಡಾ ಜೆಡಿಎಸ್ ನ ಕೈಬಿಟ್ಟದ್ದು, ಇದು ಅವತ್ತು ಲೋಕಸಭಾ ಚುನಾವಣೆಯಲ್ಲಿ ಸುಮಲತಾನ್ನ ಜಾತ್ಯಾತೀತವಾಗಿ ಗೆಲ್ಲಿಸಿದಷ್ಟೇ ಪ್ರಮುಖ ವಿದ್ಯಮಾನ.

ಇನ್ನು ಮುಂದೆ ಜಾತಿಯ ಆಧಾರದಲ್ಲಿ ಮತ ಕೇಳುವ, ಒಕ್ಕಲಿಗ = ಜೆಡಿಎಸ್ ಎಂದು ಜನರನ್ನು ಮರುಳುಮಾಡುತ್ತಿದ್ದ ಜಾತ್ಯತೀತವೆಂದು ಕರೆದುಕೊಳ್ಳುವ ಜೆಡಿಎಸ್ ನ ಆಟಗಳ ಅಂತ್ಯ ಪ್ರಾರಂಭವಾದ ಸಂಕೇತ !

ಜೆಡಿಎಸ್ ಎಂಬ ಪಕ್ಕಾ ಜಾತೀಯ ವಿಷ ಬೀಜ ಬಿತ್ತುವ ಪಕ್ಷದ ಚರಿತ್ರೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ.

ಜೆಡಿಎಸ್ ಎಂಬ ರಾಜಕೀಯ ವ್ಯಸನ

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.